Monday, December 10, 2012

ಬನ್ನಿ ಕನ್ನಡದ ಗ್ರಾಹಕನ ಕನಸುಗಳನ್ನ ನನಸಾಗಿಸೋಣ !


ಇತ್ತೀಚಿಗೆ ಗೆಳೆಯರೊಬ್ಬರು ಹೋಂಡಾ ಕಂಪನಿಯ ದ್ವಿಚಕ್ರ  ವಾಹನದ  ವಿವರ ಪುಸ್ತಿಕೆ ಅಂದ್ರೆ Manual ಕನ್ನಡದಲ್ಲಿ ಕೇಳಿ ಹೋಂಡಾ ಸಂಸ್ಥೆಗೆ ಮಿನ್ಚಾಯಿಸಿದ್ದರು.ಅದಕ್ಕೆ ಹೋಂಡಾ ಕಂಪನಿ ನೀಡಿದ್ದ ಪ್ರತಿಕ್ರಿಯೆ ಅಚ್ಚರಿ ಹುಟ್ಟಿಸುವಂಥದ್ದು.ನಮ್ಮ ದೇಶದಲ್ಲಿ ವಿವಿಧ 25 ಭಾಷೆಗಳಿದ್ದು  ಅವುಗಳಲ್ಲಿ ಮಾಹಿತಿ ನೀಡಲು ಅಸಾಧ್ಯವಂತೆ. ಕನ್ನಡದಲ್ಲಿ ನೀಡಲು ಆಗದು, ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ ಮಾಹಿತಿಯನ್ನೇ ಅವಲಂಬಿಸಿ ಎಂದು ನಿಷ್ಟುರವಾಗಿ ಉತ್ತರಿಸಿದೆ ಹೋಂಡಾ ಎಂಬ ಜಗತ್ತಿನ ಅತಿ ದೊಡ್ಡ ಆಟೋಮೊಬೈಲ್ ಸಂಸ್ಥೆ.
ದೊಡ್ಡ ಆಟೋಮೊಬೈಲ್ ಕಂಪನಿಯ ಈ ನಡೆ ವಿಚಿತ್ರವಾಗಿದ್ದು, ಒಂದು ಕುತುಹೂಲ ಕೂಡ ಮೂಡಿಸಿತು.ಇದರ ಪರಿಣಾಮವಾಗಿ ಒಂದು ಚಿಕ್ಕ ಸಂಶೋಧನೆ ಕೈಗೊಂಡಾಗ ಈ ಕೆಳಗಿನ ಚಿತ್ರಣ ಕಂಡುಬಂತು.
ಹೊಂಡಾ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಷ್ಟು ವ್ಯವಹಾರ ನಡೆಸುತ್ತಿದೆ ಎನ್ನುವತ್ತ ಒಂದು ಕಿರುನೋಟ ಬೀರಿದಾಗ ಕಂಡು ಬಂದ ಕೆಲವು ಅಂಕಿ-ಸಂಖ್ಯೆ ಹೀಗಿದೆ ನೋಡಿ!
ರಾಜ್ಯದಲ್ಲಿ ಹೋಂಡಾ ಒಟ್ಟು 55 ಶೋರೂಂಗಳನ್ನು ಹೊಂದಿದೆ. ಅವುಗಳ ಮೂಲಕ ತಮ್ಮ 11 ವಿವಿದ ಮಾಡೆಲ್ಗಳನ್ನ ರಾಜ್ಯದಲ್ಲಿ ಮಾರಾಟ ಮಾಡುತ್ತಿದೆ.ಇವುಗಳಲ್ಲಿ ಕಡಿಮೆ ಬೆಲೆಯ ಡಿಯೋ ದಿಂದ ಹಿಡಿದು 2ಲಕ್ಷಕ್ಕೂ ಮೇಲ್ಪಟ್ಟ ಬೆಲೆಯ ಸಿಬಿಆರ್ -250 ಮಾಡೆಲ್ಗಳು ಸೇರಿವೆ.



ನೇರ ಮಾರಾಟ,ಬಿಡಿ ಬಾಗಗಳ ಮಾರಾಟ ಮತ್ತು ವಾಹನಗಳ ಸರ್ವಿಸ್ ಮೂಲಕ  ಒಟ್ಟು ವ್ಯವಹಾರ ಸುಮಾರು  :1109,04,00,000 ರೂಪಾಯಿಗಳು.


(ಮಾಹಿತಿ :www.honda2wheelers.com)


ಇನ್ನು ವಿವಿಧ ವಿಮೆ ಕಂಪನಿಗಳೊಂದಿಗೆ ಕೋಟ್ಯಾಂತರ ರೂಪಾಯಿಗಳ ಒಪ್ಪಂದ ಮಾಡಿಕೊಂಡಿರುವ ಹೋಂಡಾ ಕಂಪನಿಯವರು ಅದರಲ್ಲಿ ಎಷ್ಟು ಪಾಲು ಆದಾಯ ಪಡೆಯುವರು ಎನ್ನುವ ವಿವರಗಳನ್ನ ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ ಅನ್ನುವುದು ಅರಿವಿರಲಿ.ಒಟ್ಟಿನಲ್ಲಿ ಹೇಳುವುದಾದರೆ ಸರಿಸುಮಾರು 1100 ಕೋಟಿಗೂ ಮಿಕ್ಕಿದ ದುಡ್ಡು ಹೋಂಡಾ ಕಂಪನಿಗೆ ಕರ್ನಾಟಕದಿಂದ ಬರುತ್ತಿದೆ. ಇಷ್ಟೊಂದು ಆದಾಯ ನೀಡುವ ನಾಡಿನ ಗ್ರಾಹಕರಿಗೆ ಈ ಸಂಸ್ಥೆ ಇಲ್ಲಿನ ಭಾಷೆಯಾದ ಕನ್ನಡದಲ್ಲಿ ವಿವರ ಕೈಪಿಡಿ ನೀಡಲು ಹಿಂದೇಟು ಹಾಕಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. 
ಹೋಂಡಾ Manual ಗಳಲ್ಲಿ ಹಿಂದಿಯಲ್ಲಿ ಸುರಕ್ಷತೆಯ ಕೆಲವೊಂದು ಮಾಹಿತಿಗಳನ್ನ ನೀಡಿದ್ದು, ಕನ್ನಡ ನೀಡಲು ಮಾತ್ರ ಆಗದು ಎಂಬ ಧೋರಣೆ ಯಾಕೆ ತಳೆದಿದೆ ಅರ್ಥವಾಗದ್ದು!!


ಬೇರೆಡೆ ಹೀಗಿದೆ ಹೋಂಡಾ Business Model:
ಅಂದಾಜು 95 ಲಕ್ಷ ಜನಸಂಖ್ಯೆ ಹೊಂದಿರುವ ಸ್ವೀಡನ್ ದೇಶದಲ್ಲಿ ಮಿಂದಾಣ ಸಮೇತವಾಗಿ ವಿವರಗಳನ್ನ ಇದೆ ಹೋಂಡಾ ಸಂಸ್ಥೆ ಸ್ವೀಡನ್ ಅಧಿಕೃತ ಭಾಷೆಯಾದ ಸ್ವೀಡಿಶ್ನಲ್ಲಿ ನೀಡಿದೆ.ಅದಕ್ಕಿಂತಲೂ 7 ಪಟ್ಟು ಹೆಚ್ಚಿನ ಅಂದರೆ 7 ಕೋಟಿಯಷ್ಟು ಜನರಿರುವ ಕರ್ನಾಟಕದ ಗ್ರಾಹಕರಿಗೆ ಮಾತ್ರ ಬೇರೆ ನೀತಿಯನ್ನು ಕಂಪನಿ ಹೊಂದಿದೆ ಎಂದರೆ ನಾವೊಮ್ಮೆ ಕುಳಿತು ಯೋಚಿಸಲೇಬೇಕು!

ನನಸಾಗಿಸೋಣ ಕನಸುಗಳನ್ನ:
ಹೌದಲ್ಲವೇ ಇದೆ ತಾನೇ ಹೋಂಡಾ ಸಂಸ್ಥೆಯ ಘೋಷ ವಾಕ್ಯ -ನನಸಾಗಿಸೋಣ ಕನಸುಗಳನ್ನ Power Of Dreams.ಮೇಲೆ ಹೇಳಿದಂತೆ ಅಂದಾಜು 1100 ಕೋಟಿಗಳ ಒಂದು ಆದಾಯ ಮೂಲಕ್ಕೆ ಕಾರಣರಾಗಿರುವ ನಾವೆಲ್ಲಾ ಕನ್ನಡ ದಲ್ಲಿ ಕೈಪಿಡಿಗೆ ಆಗ್ರಹಿಸೋಣ. ಕರ್ನಾಟಕ ಚಿಕ್ಕ ಮಾರುಕಟ್ಟೆ ಇಲ್ಲವೇ ಕೆಲವೇ ಜನರ ಚಿಲ್ಲರೆ ಬೇಡಿಕೆಗೆ ನಾವೇಕೆ ಕನ್ನಡ ಕೈಪಿಡಿ ನೀಡುವುದು ಅನ್ನುವುದು ಹೋಂಡಾ ಸಂಸ್ಥೆಯ ಈ ಗ್ರಾಹಕ ವಿರೋಧಿ ನೀತಿಗೆ ಕಾರಣವಾಗಿರಬಹುದು.ಈ ಎಲ್ಲ ಅಂಕಿ-ಸಂಖ್ಯೆ ವಾಸ್ತವಿಕ ವರದಿ ಕಂಪನಿಗೆ ತಲುಪಿಸೋಣ. ಆಗಲಾದ್ರು ಕಂಪನಿ ಎಚ್ಚೆತ್ತು ಗ್ರಾಹಕರಿಗೆ ಬೇಕಾದುದನ್ನು ನೀಡುವಂತಾಗಲಿ.ಕಂಪನಿಯೇ ಹೇಳುವಂತೆ ಗ್ರಾಹಕನ ಕನಸು ನನಸಾಗಲಿ.
ಇಲ್ಲಿಗೆ ಮಿಂಚೆ ಕಳಿಸಿ ಇಲ್ಲವೇ ಸಂಸ್ಥೆಯ ಮಿನ್ದಾಣ ದಲ್ಲಿ ನಿಮ್ಮ ಕಹಿ ಅನಿಸಿಕೆ ಹಂಚಿಕೊಳ್ಳಿ :
customercare@honda2wheelersindia.com
http://www.honda2wheelersindia.com/contact.aspx

ಕೊನೆಯ gear:
ಮೇಲಿನದ್ದು ಹೋಂಡಾ ಕಂಪನಿಯ ಒಂದು ಚಿಕ್ಕ ಉದಾಹರಣೆ. ಇವರ ವ್ಯವಹಾರ ರಾಜ್ಯದಲ್ಲಿ ಇನ್ನೂ ಹೆಚ್ಚಿನದೇ ಇದ್ದರೂ ಆಶ್ಚರ್ಯ ಪಡುವಂತಿಲ್ಲ. ಇದೆ ರೀತಿ ಕರ್ನಾಟಕದಲ್ಲಿ ಹಲವಾರು ವಿಶ್ವ-ಖ್ಯಾತಿಯ ಆಟೋಮೊಬೈಲ್ ಕಂಪನಿ ಕೋಟಿಗಟ್ಟಲೆ ಆದಾಯ ಕನ್ನಡಿಗರಿಂದ ತಮ್ಮ ಜೇಬಿಗಿಳಿಸುತ್ತಿವೆ. ಈ ಎಲ್ಲ ಕಂಪನಿಗಳು  ನಾಡಿನ ಬಾಷೆಯಲ್ಲಿ ವ್ಯವಹರಿಸಬೇಕೆನ್ನುವ ಜಾಗೃತಿ ಉಂಟಾಗಬೇಕು.ವಿಶ್ವದ ೨ನೇ  ಅತಿದೊಡ್ಡ ದ್ವಿಚಕ್ರ ಉತ್ಪಾದಕ,ವಿಶ್ವದ ನಾಲ್ಕನೇಯ  ಅತಿದೊಡ್ಡ ಟ್ರಾಕ್ಟರ್ ಉತ್ಪಾದಕ,ಹಾಗು ೭ ನೆಯ ಬೃಹತ್ ಕಾರು ಉತ್ಪಾದಕ ದೇಶ ನಮ್ಮದಾಗಿದ್ದು,ದಿನೇ  ದಿನೇ  ಹೊಸ ಕಂಪನಿಗಳು ನಮ್ಮ ದೇಶ-ರಾಜ್ಯಕ್ಕೆ ಕಾಲಿಡುತ್ತಿವೆ.ಇದೆ ಸಮಯಕ್ಕೆ ನಾವೆಲ್ಲಾ ಎಚ್ಚೆತ್ತು ನಮ್ಮನುಡಿಯಲ್ಲಿ ಸೇವೆ ಪಡೆಯುವ ವ್ಯವಸ್ಥೆ ಕಟ್ಟೋಣ ಬನ್ನಿ!Let's Accelerate!

Sunday, August 12, 2012

ರೈಲು ನೀತಿ ಹಿಂಗ್ಯಾಕ ಐತಿ??

ರೈಲು ನೀತಿ ಹಿಂಗ್ಯಾಕ ಐತಿ??


ನಮಸ್ಕಾರ. ಹೇಗಿದೀರಪ್ಪ? ನಮಗಂತೂ ನಮ್ಮ ನಾಡಲ್ಲಿ ನಡೆಯೋ ರೀತಿನೀತಿ ಸರಿಯಾಗಿ ಕಾಣಿಸ್ತಿಲ್ಲ !! ಹಂಗಾಗಿ ನಾನಂತೂ ಚೆನ್ನಾಗಿಲ್ಲ. 

ಮೊನ್ನೆ ಹೈದೆರಬದಗೆ  ಹೋಗಿದ್ದೆ  ಅಲ್ಲಿಯ ವ್ಯವಸ್ಥೆ ನೋಡಿ ನನಗೆ ಸರಿಯನ್ನಿಸಿತು ಹೌದು ಒಂದು ನಾಡಿನಲ್ಲಿ ಅಲ್ಲಿಯ ಬಾಷೆಗೆ ಮೊದಲ ಆದ್ಯತೆ ಕೊಡಬೇಕಲ್ಲವೇ ? ಅದಕ್ಕೆ ತಕ್ಕಂತೆ ಇದೆ ಅಲ್ಲಿ ಕಂಡು ಬಂತು ಸಾರಿಗೆ ಬಸ್ಗಳು ಇರಲಿ ಮೆಟ್ರೋ ರೈಲು ಅಷ್ಟೇ ಅಲ್ಲ ದಕ್ಷಿಣ -ಮದ್ಯ ರೈಲು ಕೂಡ ಅಲ್ಲಿಯ ಜನಕ್ಕೆ ಅರ್ಥವಾಗೋ ಹಾಗೆ ತೆಲಂಗು ಬಾಷೆಯಲ್ಲಿ ಮಾಹಿತಿವಿವರಗಳನ್ನ ನೀಡಿದೆ.



ನಮ್ಮೂರಾಗ ಯಾಕಪ್ಪ ಹಿಂಗ ಆಡ್ತವ್ರೆ ?? 

ಅಲ್ಲ ಈ ನೈಋತ್ಯ ರೈಲು ಇರೋದು ನಮ್ಮ ಹುಬ್ಬಳ್ಳಿಯಲ್ಲಿ ಇದರ ವ್ಯಾಪ್ತಿಯಲ್ಲೇ ರಾಜ್ಯದ ಬಹುತೇಕ ರೈಲು ಕೇಂದ್ರಗಳು ಒಳಪಡುತ್ತವೆ  ಅದೇ  ವ್ಯಾಪ್ತಿಗೆ ವಿಜಾಪುರ-ಹುಬ್ಬಳ್ಳಿ -ಬೆಂಗಳೂರು ಗೋಲಗುಮ್ಮಟ ಎಕ್ಷ್ಪ್ರೆಸ್ಸ ರೈಲು ಬಂಡಿ ಕೂಡ ಸೇರಿದೆ  ಅಲ್ಲಿ ನೋಡಿದ್ರೆ ಕನ್ನಡಿಗರಿಗೆ ಅನುಕೂಲವಾಗುವಂತೆ ಒಂದು ಮಾಹಿತಿ ಕೂಡ ಕೊಟ್ಟಿಲ್ಲ. ಒಂದು ಕಣ್ಣಿಗೆ ಬೆಣ್ಣೆ iಇನ್ನೊಂದು ಕಣ್ಣಿಗೆ ಸುಣ್ಣ ಅಂದ್ರೆ ಇದೇನಾ? ಕನ್ನಡಿಗರಿಗೆ ಮೊದಲು ಬಾರತೀಯನಾಗು ಎಂದು ಕಿವಿ ಮೇಲೆ ಕೆಂಪುತೋಟ(ಲಾಲ್ಬಾಗ್) ಇಟ್ಟವರಲ್ಲಪ್ಪ. ಕೆಳಗಿನ ಚಿತ್ರಗಳನ್ನು ನೋಡಿ ವಿಜಾಪುರ-ಬೆಂಗಳೂರು ನಡುವೆ ಓಡಾಡೋ ಬಂಡಿಯಲ್ಲಿ ಹಿಂದಿ-ಇಂಗ್ಲಿಷ್ ಮಾತ್ರ.ಹೆದರಬಾದ್ ನಿಂದ ವಿವಿದ ಊರಿಗೆ ಹೊರಡುವ ರೈಲುಗಳಲ್ಲಿ ತೆಲಂಗು  ನೀಡಲಾಗಿದೆ.
ದಕ್ಷಿಣ ಮದ್ಯ ರೈಲು ಹೆದ್ರಬಾದ್ ನಲ್ಲಿ ಕೇಂದ್ರ ಹೊಂದಿ ಆಂದ್ರ ನಾಡಿನಿಂದ ಸಂಚರಿಸುವ ಎಲ್ಲ ರೈಲುಗಳಲ್ಲಿ ತೆಲಂಗಿನಲ್ಲಿ ವಿವರ ನೀಡಿದ್ದಾರೆ. ಅದೇ ನಮ್ಮ ತೆಂಕಣ -ಪಡುವಣ (ನೈಋತ್ಯ) ರೈಲಿನ ಕೇಂದ್ರ ಹುಬ್ಬಳ್ಳಿಯಲ್ಲಿ ಹೊಂದಿ ಬರಿ ಬಿಹಾರಿಬಾಬುಗಳ ಆಳ್ವಿಕೆಯಲ್ಲಿ ನಡೀತಾ ಇದೆ. ಕನ್ನಡಿಗರು ಮಾತ್ರ ಬಾರತ ಬಾರತೀಯತೆ ಅಂತ ಕಥೆ ಕೇಳ್ಕೊಂಡು ತಮ್ಮ ನಾಡಲ್ಲಿ ಕನ್ನಡ ವಿಲ್ಲದೆ ಅನಾಥರಾಗಿದ್ದಾರೆ.
ಕನ್ನಡಿಗರನ್ನ ಯರ್ರಬಿರಿ ಉಗಿದು ಹಿಂದಿಗರನ್ನೇ ನೈರುತ್ಯ ರೈಲಿನಲ್ಲಿ ತುಂಬಿರುವ ಲಾಲೂ ಯಾದವ ಅವರ ಕೊಡುಗೆಯೇ ಇದು. ತಲೆತಲಾಂತರದಿಂದ ಕನ್ನಡಿಗರ ಮೇಲೆ ಇಂಥ ಗದಾಪ್ರಹಾರ ನಡೆದಿದೆ.ಒಂದೆಡೆ ಹಿಂದಿ ಹೇರಿಕೆ ಇನ್ನೊಂದೆಡೆ ನಮ್ಮ ಬಾಶೆಯಲ್ಲಿ ದೊರೆಯದೆ ಪರಬಾಷೆಗೆ ಮೊರೆಹೊಗಬೇಕಾದ ಕನ್ನಡಿಗರ ದು- ಸ್ತಿತಿ.


ಮುನಿಯನ ಮಾದರಿ:

ರಾಜ್ಯದವರೇ ಆದ  ಕೇಂದ್ರದ ರಾಜ್ಯ ರೈಲು ಸಚಿವ ಕೆ.ಎಚ್.ಮುನಿಯಪ್ಪನವರು ಸುಮ್ಮನೆ ಇರದೇ ನಮ್ಮ ಬಾಗದಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಸ್ವಲ್ಪ ತೆರೆಯಳೆಯಬೇಕಿದೆ. ನೈರುತ್ಯ ರೈಲ್ವೆಯಲ್ಲಿ ಲಾಲೂ ಬರಿ ಬಿಹಾರಿಗರನ್ನು ತುಂಬಿದಾಗ ರಾಜ್ಯದ ಸಚಿವ,ಶಾಸಕರು,ಸಂಸದರು ಮೌನಕ್ಕೆ ಶರಣಾಗಿದ್ದರು.ಈಗಲೂ ಇದೆ ಮಾದರಿ ಅನುಸರಿಸಿದರೆ ನಮಗೆ ಹಣೆ ಮೇಲೆ ಪಂಗನಾಮ, ಬಾಯಿಗೆ ಮಣ್ಣು ಕಚಿತ.


ಹಿಂಗ ಮಾಡ್ರಿ:

ಮೊನ್ನೆ ಗೆಳೆಯನೊಬ್ಬ ಗದಗನಿಂದ- ಹುಬ್ಬಳ್ಳಿ ಗೆ ಹೊರಡುವಾಗ ರೈಲಿನ ಚೀಟಿಯಲ್ಲೂ ಕನ್ನಡವೇ ಇಲ್ಲವೆಂದು ತಮ್ಮ ಬೇಸರ ವ್ಯಕ್ತ ಪಡಿಸಿದ್ದರು.ಇದೆ ರೀತಿ ಶಿವಮೊಗ್ಗ-ಬೆಂಗಳೂರು ರೈಲಿನ ಮಾರ್ಗದಲ್ಲೂ ಕನ್ನಡದಲ್ಲಿ ಮಾಹಿತಿಯೇ ಇಲ್ಲವೆಂದು ಗೆಳೆಯರು ತಿಳಿಸಿದ್ದರು.ಕೇಂದ್ರದ ಅಧೀನದಲ್ಲಿರುವ ಪೋಸ್ಟ್,ಬಿ.ಎಸ್.ಏನ್.ಎಲ್ ಸಂಸ್ಥೆಗಳಿಂದ ಮೊದಲು ಮೂಡುತ್ತಿದ್ದ ಕನ್ನಡ ನಿದಾನವಾಗಿ ಮಾಯವಾಗಿದೆ. ಸುಮ್ಮನೆ ಕೂತು ಹೋಗಲಿ ಬಿಡು ಅನ್ನೋ ಕನ್ನಡಿಗರ ವಿಶಾಲ ಮನೋದೋರಣೆಗೆ ಕೇಂದ್ರ ಸರಕಾರ ಕೊಡುತ್ತಿರುವ ಕೊಡುಗೆ ಇದು. ಈಗ್ಲಾದ್ರೂ ನಾವೆಲ್ಲರೂ ಎಚ್ಚೆತ್ತು ಇದನ್ನ ವಿರೋಧಿಸಬೇಕಾಗಿದೆ. ಹಿಂದಿ ಹೇರಿಕೆಗೆ ಕಡಿವಾಣ ಹಾಕೋಣ. ಬನ್ನಿ ಕೆಳಗಿನ ಮಿನ್ಚಂಚೆಗೆ ಮಿನ್ಚಾಯಿಸಿ ಈ ದುರಾಡಳಿತಕ್ಕೆ ವಿರೋಧಿಸಿ:

cpro@swr.railnet.gov
.in,customercare@indianrai

lways.gov.in,khmuni@sansad
.nic.in

Saturday, March 24, 2012

ನಮಗೂ ಬರಲಿ ಒಂದು ಹೊಸ ಪ್ರಾದೇಶಿಕ ಪಕ್ಷ, ಸಿಗಲಿ ನಾಡಿಗೆ ಹೈ -ಕಮಾಂಡ್ ನಿಂದ ಮೋಕ್ಷ

ನಿಜ ಅಲ್ವ? ನಮ್ಮ ರಾಜ್ಯಕ್ಕೂ ಒಂದು ಪ್ರಾದೇಶಿಕ ಪಕ್ಷವಿದ್ದು ಕನ್ನಡನಾಡಿನ ಬಗ್ಗೆ ಹೋರಾಡಿದರೆ ಎಷ್ಟು ಒಳ್ಳೆಯದು ಒಂದ್ಸಲಿ ಯೋಚಿಸಿ.
ಪ್ರಾದೇಶಿಕ ಪಕ್ಷಗಳ ಅಲೆ-ಸ್ಥಳೀಯ ಮುಖಂಡರಿಗೆ ಬೆಲೆ :
ಕಳೆದ ೨ ವಾರಗಳ ಹಿಂದೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆದು ಫಲಿತಾಂಶ ಎಲ್ಲರ ಮುಂದೆ ಇದೆ. ದೇಶದ ಅತಿ ದೊಡ್ಡ ರಾಜ್ಯವೆಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶಕ್ಕೆ ಯುವ ನಾಯಕ  'ಅಖಿಲೇಶ್ ಯಾದವ' ಆಯ್ಕೆಯಾಗಿ,ಸಣ್ಣ ವಯಸ್ಸಿನ ಮುಖ್ಯ ಮಂತ್ರಿ ಎನ್ನಿಸಿಕೊಂಡಿದ್ದಾರೆ.ಮಾಯಾವತಿಯ ವಜ್ರಮುಷ್ಟಿಯಲ್ಲಿದ್ದ ಉ.ಪ್ರ.ವನ್ನು ತಮ್ಮ ತೆಕ್ಕೆಗೆ ಒಲಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳು ಹರ-ಸಾಹಸವನ್ನೇ ಪಟ್ಟಿದ್ದವು.ಹಲವು ವರುಷಗಳಿಂದ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ದೊಂಬರಾಟಕ್ಕೆ ಜನ ಮತ್ತೆ ಸೊಪ್ಪು ಹಾಕದೆ,ನಮ್ಮನ್ನು ಆಳಲು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ.ದೆಲ್ಹಿಯ ದಣಿಗಳು ಹೇಳಿದಂತೆ ಕುಣಿಯೋ ಮುಖ್ಯ ಮಂತ್ರಿ ಬೇಡೋ ಅನ್ನೋ ಉತ್ತರ ನೀಡಿದ್ದಾರೆ. ಇನ್ನು ಪಂಜಾಬಿ ಸರದಾರಗಳು ಕೂಡ "ಆಕಾಲಿ ದಳ"ಕ್ಕೆ ಮನ್ನಣೆ ನೀಡಿದ್ದಾರೆ.ಭಾ.ಜ.ಪ.ಕಾಂಗ್ರೆಸ್ಸ್ ಗಳು ಚಿಕ್ಕಪುಟ್ಟ ಗೋವ,ಮಣಿಪುರ ನಂಥ ರಾಜ್ಯಗಳನ್ನು ತಮ್ಮೆಡೆ ಉಳಿಸಿಕೊಂಡು ಹಾರಾಡುತ್ತಿವೆ.

ಕಳೆದ ಹಲವು ದಶಕಗಳಿಂದ ತಮಿಳುನಾಡು,ಕೇರಳ,ಒರಿಸ್ಸಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳೇ ಮುಂಚುಣಿಯಲ್ಲಿದ್ದು ಜನ ಪರತೆಯನ್ನು ಸಾರಿ ಹೇಳಿವೆ.ಪ್ರಜಾಪ್ರಭುತ್ವದ ನಿಜವಾದ ರೂಪವನ್ನು ಈ ರಾಜ್ಯಗಳ ಜನತೆ ಭಾರತಕ್ಕೆ ತೋರಿಸಿ ಕೊಟ್ಟಿದ್ದಾರೆ.ತಮಿಳುನಾಡಿನಲ್ಲನ್ತು ಡಿ.ಎಂ.ಕೆ ,ಎ.ಆಯ.ಎ .ಡಿ.ಎಂ.ಕೆ,ಪೀ.ಎಂ.ಕೆ ಎಂಬ ಸ್ಥಳೀಯ ಪಕ್ಷಗಳೇ ಹೆಚ್ಚು ಜನಮನದಲ್ಲಿದ್ದು,ಬೇರೆ ದೆಲ್ಲಿಯಲ್ಲಿ ಕೇಂದ್ರ-ಕಛೇರಿಯನ್ನು ಹೊಂದಿದ ಪಕ್ಷಗಳಿಗೆ ನೆಲೆ ಕಾಣಲು ಬಿಟ್ಟಿಲ್ಲ.ಜಯಲಲಿತಾ ಮತ್ತು ಕರುಣಾ ನಿಧಿ ಇವರದೇ ಅಟ್ಟಹಾಸ. ಪಕ್ಕದ ಮಹಾರಾಷ್ಟ್ರದಲ್ಲಿ ಮುದಿ  ಗೂಬೆ ಬಾಳ-ಟಾಕರೆ ಶಿವಸೇನೆ, ಶರದ್ ಪವಾರ್ ರ ರಾಷ್ಟ್ರವಾದಿ ಕಾಂಗ್ರೆಸ್ಸ್ ಗಳು ಹೆಚ್ಚು ಜನ ಪ್ರಿಯ.  ಒರಿಸ್ಸಾದಲ್ಲಿ ಬಿಜು ಜನತಾದಳ ಪಕ್ಷ ಅಸ್ತಿತ್ವಕ್ಕೆ ಬಂದಾಗಿನಿಂದ ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಹುಟ್ಟೇ-ಅಡಗಿದಂತೆ ಆಗಿದೆ. ಇದೆ ಪಟ್ಟಿಗೆ ನೀವು ಪಶ್ಚಿಮ-ಬಂಗಾಳವನ್ನು ಸೇರಿಸಬಹುದು.ಮಮತಾ ಬ್ಯಾನೆರ್ಜಿ ನೇತ್ರತ್ವದ ತೃಣಮೂಲ ಬಹುದಿನದಿಂದ ನಡೆಯುತ್ತಿದ್ದ ಕಮ್ಯುನಿಸ್ಟರಿಗೆ ಗೇಟ್ ಪಾಸ್ ನೀಡಿದ್ದಲ್ಲದೆ,ಇತರೆ ಪಕ್ಷಗಳನ್ನು ತೃಣ ಸಮ ಮಾಡಿದೆ. ಆಂಧ್ರದಲ್ಲಿಯೂ ಚಂದ್ರ ಬಾಬು ನಾಯಿಡು ರವರ ಟಿ.ಡಿ.ಪಿ ಮತ್ತೊಬ್ಬ ಚಂದ್ರ ಶೇಕರ ರಾವ್ ರವರ  ಟಿ.ಆರ್.ಎಸ್ ಸ್ಥಳೀಯ ಕೇಂದ್ರಿಕ್ರುತವಾಗಿದ್ದು.ಟಿ.ಡಿ.ಪಿ.ಗೆ ಈ ಮುಂಚೆ ಅಧಿಕಾರದ ಗದ್ದುಗೆಯನ್ನು ಆಂಧ್ರದ ಜನತೆ ನೀಡಿದ್ದರು. 
ಗುಜರಾತ್ ರಾಜ್ಯದಲ್ಲಿ ಭಾ.ಜ.ಪ ಆಡಳಿತದಲ್ಲಿದ್ರು ನರೇಂದ್ರ ಮೋದಿ ಗುಜರಾತಿ ಜನಪರ ಕಾರ್ಯಗಳಿಂದಲೇ ಗೆದ್ದಿದ್ದು ಎಲ್ಲರಿಗು ಗೊತ್ತಿದ್ದ ವಿಚಾರ.ಈಶಾನ್ಯ ರಾಜ್ಯಗಳಲ್ಲಿ ಆಸಂ ಗಣ ಪರಿಷದ,ಸಿಕ್ಕಿಂ-ಡೆಮಾಕ್ರಟಿಕ್ ಫ್ರಂಟ್,ಮೆಘಾಲಯ-ನ್ಯಾಷನಲ್ ಕಾಂಗ್ರೆಸ್ಸ್ ನಂಥ ಹಲವಾರು ಸ್ಥಳೀಯ ಪಕ್ಷಗಳು ಪ್ರಚಲಿತದಲ್ಲಿದ್ದು ತಮ್ಮ ಜನರಿಗಾಗಿ ಕೆಲಸ ಮಾಡುತ್ತಿವೆ.

ಯಾರಿಗೆ ಹೇಳೋಣ ನಮ್ಮ ಪ್ರಾಬ್ಲೆಮ್ಮು?
ಕರುನಾಡಿನಲ್ಲಿ ಮಾತ್ರ ಯಾಕೆ ಹೀಗೆ ಅಂತ ನಮ್ಮೆಲ್ಲರ ಪ್ರಶ್ನೆ ಅಲ್ಲವೇ? ತಲೆ -ತಲಾಂತರದಿಂದ ನಮ್ಮಲ್ಲಿ ನಾಯಕರುಗಳು ಕಾಂಗ್ರೆಸ್ಸ್ ಅಥವಾ ಭಾ.ಜ.ಪ ಎರಡೇ ಪಕ್ಷಗಳು ರಾಜ್ಯಕ್ಕೆ ಅನ್ನೋ ದುರ್ವಿಚಾರದಿಂದ ನಾಡಿಗೆ ದ್ರೋಹವಾಗಿದೆ.ಹಲವು ವರುಷಗಳಿಂದ ಬಹುತೇಕ ನಡೆಯುವ ಚುನಾವಣೆಗಳಲ್ಲಿ ಇವೆರಡೆ ಪಕ್ಷಗಳು ಬಹುಪಾಲು ಯಶಸ್ಸು ಕಂಡಿದ್ದು,ಸ್ಥಳೀಯ ಪಕ್ಷಗಳನ್ನ ಬೆಳೆಯದಂತೆ ನೋಡಿ ಕೊಂಡಿವೆ. ಒಂದು-ಕಾಲದಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಿ ನಾಡಿನ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗ್ಡೆ ರವರು ಹುಟ್ಟುಹಾಕಿದ ಜನತಾ-ದಳ ಬಹಳಷ್ಟು ಕಷ್ಟದಲಿ ಸಿಲುಕಿ ಅಂತರ್-ಜಗಳದಿಂದ ಒಡೆದು ನುಚ್ಚು ನೂರಾಗಿ ಗೌಡರ ಪಾಲಾಯಿತು.ಇಗ ಅದು ಬರಿ ಮಣ್ಣಿನ ಮಕ್ಕಳ ಅಲ್ಲಲ್ಲ ದೇವೇಗೌಡರ ಮಕ್ಕಳ ಪಕ್ಷವಾಗಿ ಬೆಳೆದಿದೆ.ದಕ್ಷಿಣ ಭಾರತದಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ  ಅಧಿಕಾರದ ಗದ್ದುಗೆ ಹಿಡಿದು ಬಿಗಿದ ಭಾರತಿಯ ಜನತಾ ಪಾರ್ಟಿ ಎಷ್ಟರ ಮಟ್ಟಿಗೆ ಕನ್ನಡಪರ,ಕರ್ನಾಟಕದ ಜನತೆಯ ಪರ ಎಂಬುದು ಈಗಾಗಲೇ ತೋರಿಸಿ ಕೊಟ್ಟಿದೆ!!ಬೆಳಗಾವಿ ವಿಷಯ ಬಂದರೆ ಮಹಾರಾಷ್ಟ್ರದಲ್ಲಿ ತನ್ನ ಮಿತ್ರ ಶಿವಸೇನೆಗೆ ತಾಳ ಹಾಕುತ್ತ,ಕನ್ನಡ ವಿರೋಧಿ ಪಕ್ಷಗಳೊಡನೆ ಬೆರೆಯುತ್ತಾ ನಾಡ-ದ್ರೋಹಬಗೆಯುತ್ತಿದೆ. ಅಷ್ಟೇ ಅಲ್ಲದೆ ರಾಜ್ಯಸಭೆಗೆ ಕನ್ನಡ ಅಭ್ಯರ್ಥಿಗಳನ್ನು ಕಳಿಸದೇ ನೆರೆಯ ವೆಂಕಯ್ಯ,ರಾಜಕೀಯದ ಗಂಧ ಗಾಳಿ ಗೊತ್ತಿರದ ಹೇಮಾ-ಮಾಲಿನಿರನ್ನು ಆಯ್ಕೆ ಮಾಡಿ ಕನ್ನಡಿಗರ ಹಿನ್ನೆಡೆಗೆ ನಾಂದಿ ಹಾಡಿದೆ.ಕಾಂಗ್ರೆಸ್ಸ್ ಅಧಿಕಾರಾವಧಿಯಲ್ಲೂ ರಾಜ್ಯದ ಹಿತಾಸಕ್ತಿಗೆ ಬೆಂಕಿ ಬಿದ್ದಿದ್ದೆ ಹೆಚ್ಚು.

ಹೈ ಕಮಾಂಡ್ ಎಂಬ ಬೆದರು ಬೊಂಬೆ:
ಪ್ರಜಾಪ್ರಭುತ್ವದಲ್ಲಿ ನಾವುಗಳು ಆರಿಸಿದ ಜನಪ್ರತಿನಿಧಿಗಳೆಂದು ಕರೆಸಿಕೊಳ್ಳೋ ಅಭ್ಯರ್ಥಿಗಳು ನಮ್ಮ ರಾಜ್ಯವನ್ನು ಆಳಬೇಕು ಆವಾಗಲೇ ಜನತೆಯ ಆಯ್ಕೆಗೆ ಮನ್ನಣೆ ದೊರೆತಂತೆ. ಉಸಿರಾಡಲು ಕೂಡ ಅಪ್ಪಣೆ ಪಡೆಯಲು ಡೆಲ್ಲಿಗೆ ನಮ್ಮ ನಾಯಕರು ಹೋಗಬೇಕು? ಇದೆ ರೀ ಹಾಯ್-ಕಮಾಂಡ್ ರಾಜಕಾರಣ ಅನ್ನೋದು.ಗ್ರಾಮ-ಪಂಚಾಯ್ತಿ,ಪುರ-ಸಭೆಯಿಂದ ಹಿಡಿದು ಲೋಕಸಭೆ,ರಾಜ್ಯಸಭೆಗೆ ಆಯ್ಕೆಯಾಗೋ ಅಭ್ಯರ್ಥಿಗಳನ್ನು ಡೆಲ್ಲಿಯಲ್ಲಿ ಕುಳಿತಿರುವ ರಾಜಕಾರಣಿಗಳು ನಿರ್ಧಾರ ಮಾಡೋದು ಅಂದ್ರೆ ಏನು ಅರ್ಥ? ನಾವು ಚುನಾಯಿಸಿದ ಜನರಿಗೆ ಯಾವುದೇ "ಪವರ್" ಇಲ್ಲದೆ ಪ್ರವರ ಕಳೆದು ಕೊಳ್ಳಬೇಕೆ? ಪಕ್ಷದಲ್ಲಿ ಭಿನ್ನಮತದ ಶಮನಕ್ಕು ಇವರೇ ಬೇಕು, ಸಿ.ಎಂ ಆಯ್ಕೆಗೂ ಇವರೇ ಸೈ ಅನ್ನಬೇಕು! ಇದ್ಯಾವ ಸೀಮೆಯ ಪ್ರಜಾ-ಪ್ರಭುತ್ವ ಅನ್ನೋದು ದಿಲ್ಲಿಯ ದೊರೆಗಳು ಸ್ಪಷ್ಟ ಪಡಿಸಬೇಕಾಗಿದೆ? ಇದರಿಂದ ರಾಜ್ಯದ ಬೆಳವಣಿಗೆ ಕುಂಠಿತ ಗೊಂಡಿದೆ.
 ಕರ್ನಾಟಕ ಇಂದು ಎದುರಿಸುತ್ತಿರವ ನದಿ,ಗಡಿ,ಅಥವಾ ನಮ್ಮ ಇತರೆ ಸಮಸ್ಯೆಗಳಿಗೆ ಎಂದಿಗೂ ನ್ಯಾಯ ಸಿಕ್ಕಿಲ್ಲ.ಹಲವು ನಾಯಕರು ಬದಲಾದರೆ ಹೊರತು ಅಕ್ಕ-ಪಕ್ಕದ ರಾಜ್ಯಗಳೊಂದಿಗೆ ಅಂಟಿಕೊಂಡಿರುವ ಸಮಸ್ಯೆಗಳ ಪರಿಹರಿಸಲು ಯಾವ  ಹೈ-ಕಮಾಂಡ್ ಮುಂದೆ ಬರಲೇ ಇಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಲು ನ್ಯಾಯಯುತವಾದ ರಾಜ್ಯದ ನಡೆಗಳನ್ನು ವಿರೋಧಿಸದರೆ ಹೊರತು ಕನ್ನಡಿಗರ ಪರ ನಿಲ್ಲಲಿಲ್ಲ. ಅಸ್ತಿತ್ವ ಹೊಂದಿರುವ ರಾಜ್ಯದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು, ಅಸ್ತಿತ್ವ ಇರದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನಮ್ಮ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟರೆ ಹೊರತು ಜನರಂದು ಕೊಂಡಂತೆ ನಡೆಯಲಿಲ್ಲ.ಕಾವೇರಿ ನದಿ ವಿಚಾರ ದಲ್ಲಿ ವಾಜಪೈ ಸರ್ಕಾರ ತಮಿಳುನಾಡಿಗೆ ಸೈ ಅಂದರೆ, ಎಸ್.ಎಂ.ಕೃಷ್ಣ ,ಯಡಿಯೂರಪ್ಪ ಸರಕಾರಗಳು ಕೃಷ್ಣ ನದಿ ನೀರಿನ  ಹಕ್ಕಿಗಾಗಿ ಹೋರಾಡದೆ ಹೈ-ಕಮಾಂಡ್ ಆದೇಶವನ್ನು ಚಾಚು ತಪ್ಪದೆ ಪಾಲಿಸಿದವು.ಕೆಲಸವಿಲ್ಲದೆ ಗಡಿ ತಂಟೆಗೆ ಮಹಾರಾಷ್ಟ್ರ ಮುಂದಾದಗ್ಲು ಭಾ.ಜ.ಪ ಶಿವಸೇನೆ ತಾಳಕ್ಕೆ ಕುಣಿದರೆ,ಕಾಂಗ್ರೆಸ್ಸು ಹೈ-ಕಮಾಂಡ್ ಮಾತಿಗೆ ಓಗೊಟ್ಟು ಮೌನಕ್ಕೆ ಶರಣಾಯಿತು.ನಮ್ಮ ಬಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ದೊರೆಕಿಸಲು ತಂಟೆ ಮಾಡಿದ ತಮಿಳರಿಗೂ ದಿಲ್ಲಿಯ ದೊರೆಗಳು ಹೌದು ಎಂದರು.

ಆಗಬೇಕಾಗಿರೋದು ಏನು?
ಸದ್ಯಕ್ಕೆ ರಾಜ್ಯದಲ್ಲಿ ಇರೋ ಗಡಿ,ನದಿ,ವಲಸೆ,ಉದ್ಯೋಗ ಮುಂತಾದ ಸಮಸ್ಯೆಗಳಿಗೆ ಕನ್ನಡಪರ ಸಂಘಟನೆಗಳಾದ ಕ.ರ.ವೇ,ಜಯ-ಕರ್ನಾಟಕ,ವಾಟಾಳ್ ಪಕ್ಷದತ್ತ ಜನ ಹೋಗಬೇಕಾಗಿದೆ. ಎಷ್ಟೇ ಆದರು ಇವು ಸಂಘಟನೆಗಳು-ಬರಿ ಹೋರಾಟ ಮಾತ್ರ ಸಾಧ್ಯ. ಅಷ್ಟಾಗಿಯೂ ಕ.ರ.ವೇ ಯಂತಹ ಸಂಘಟನೆಗಳು ರಾಜ್ಯದ ಪರ ನಿಂತಿವೆ,ಉತ್ತರ ಕರ್ನಾಟಕದಲ್ಲಿ ನೆರೆ ಮತ್ತಿತರೇ ಕಷ್ಟ ಉಂಟಾದಾಗ ಜನರಿಗೆ ಸಹಾಯಮಾಡಿದ್ದು ಎಲ್ಲರಿಗೂ ಗೊತ್ತಿದ ವಿಚಾರ.ಇವುಗಳು ಪಕ್ಷಗಳಾಗಿ ಅಧಿಕಾರಕ್ಕೆ ಬಂದಾಗಲೇ ನಮ್ಮಲ್ಲಿರೋ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಗಳು ಆರಂಭಗೊಳ್ಳುವವು.ಲೋಕಸಭೆಯಲ್ಲಿ ನಮ್ಮ ಅಹವಾಲುಗಳನ್ನು ಕೇಂದ್ರ-ಸರಕಾರ ಕೇಳಿ ಬಗೆಹರಿಸುವತ್ತ ಚಿತ್ತಕೊಡುವುದು.ಪ್ರತಿಬಾರಿಯ ರೈಲ್ವೆ ಬಜೆಟ್ ನಲ್ಲಿ ಚೊಂಬು ನೀಡುವ ರೈಲ್ವೆ ಸಚಿವರುಗಳು ರಾಜ್ಯದ ಒಳ-ನಾಡಿಗೆ ಅನುಕೂಲವಾಗುವಂತೆ ಹೊಸ ರೈಲು ಬಿಡುವರು.ರಾಜ್ಯದ ವಿಚಾರದಲ್ಲಿ ತಮಿಳುನಾಡು,ಮಹಾರಾಷ್ಟ್ರ,ಆಂಧ್ರ ಪರ ನ್ಯಾಯ ನೀಡುವ ಕೇಂದ್ರ-ಸರಕಾರ ಬದಲಾಗುವುದು.ಇವೆಲ್ಲ ಆಗಬೇಕಾದರೆ ಸ್ಥಳೀಯ ಜನರ ಕೇಂದ್ರಿಕೃತ ಪಕ್ಷದ ಉದಯವಾಗಬೇಕಿದೆ,ಜನತೆಯು ಇದರತ್ತ ಮುಖ ಮಾಡಬೇಕಿದೆ.ಇಂದಿನ ಹೊಸ ಯುಗಾದಿ ,ಹೊಸ ವರುಷಕ್ಕೆ ಕನ್ನಡಿಗರ ಯೋಚನಾ ಲಹರಿಯನ್ನು ಬದಲಾಯಿಸಿ ಹೊಸ ಕನ್ನಡ ಪಕ್ಷಕ್ಕೆ ಸ್ವಾಗತ ಮಾಡಲಿ.ಬರಿ ಬೆವನ್ನೇ ತಿಂದಿರುವ ಜನತೆಗೆ ಬೆಲ್ಲದ ಸವಿಯು ಬರಲಿ.

ಅಂತಿಮ ಲಹರಿ:
ಆರ್.ಎಸ್.ಎಸ್ ನ ಹಿರಿಯ ನಾಯಕ ಸುರೇಶ ಜೋಷಿ ಅವರು  ಮೊನ್ನೆ ಹೇಳಿದ್ದು ನೋಡಿ-ಸ್ಥಳೀಯ /ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ದೇಶದ ಚಿಂತೆಗೆ ಕಾರಣವಂತೆ.ಸಂಘ-ಪರಿವಾರದ ಈ ಅಧಿಕಾರದ ದುರಾಸೆಯ ಶಿಸ್ತು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ. ಕರ್ನಾಟಕದಂತೆ ಎಲ್ಲ ರಾಜ್ಯಗಳು ಕೂಡಿದ್ರೆನೆ ಈ ದೇಶ  ಅನ್ನೋದನ್ನ ಇಂಥವರು ಮನಗಾಣಬೇಕಿದೆ.ಇಲ್ಲದೆ ಹೋದಲ್ಲಿ ಪ್ರತಿ-ರಾಜ್ಯದಲ್ಲಿ ಸ್ಥಳೀಯ ನಾಯಕತ್ವ ಪಡೆಯಲು ಶಾಸಕ,ಸಚಿವರುಗಳು ರೆಸಾರ್ಟ್ ರಾಜಕಾರಣ ಮಾಡಬೇಕಾಗುವುದು.

Friday, November 4, 2011

ಈ ದೀಪಾವಳಿ ನೀವು ದಿವಾಳಿ ಆಗ್ಲಿಲ್ಲ ತಾನೇ?




ನಮಸ್ಕಾರ ಕಣ್ರಪ್ಪ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.ಅದೇನೋ ಇತ್ತೀಚಿಗೆ ಈ ಎಲ್ಲ ಪ್ಯಾಟೆ ಜನಗಳು ಬಂದು ಹ್ಯಾಪಿ ದಿವಾಳಿ ಹ್ಯಾಪಿ ದಿವಾಳಿ ಅಂತ ಕೈಕುಲ್ತವ್ರೆ.ಯಾಕಅಣ್ಣ   ಹಿಂಗೆ ಅಂದ್ರೆ ದೀಪಾವಳಿ ಸುಭಾಸಯನ ಪ್ಯಾಟೆಲಿ ಈ ರೀತಿ ಕಣ್ಲ ಹೇಳೋದು ಅಂತ ನಮ ಮುಖಕ್ಕೆ ತಿವಿತ ಇದ್ರೂ.ಅಲ್ಲಪ್ಪ ದೀಪಾವಳಿ ವರುಷಕ್ಕೊಮ್ಮೆ ಬರೊ ದೀಪದ ಹಬ್ಬ ನಮ್ಮ ನಾಡಿನ ಎಲ್ಲೆಡೆ ಸಂಭ್ರಮ ಖುಷಿಯಿಂದ ಆಚರಿಸ್ತವ್ರೆ,ಈ ನಡುವೆ ಯಾವ್ನಿಗಾದ್ರು ದಿವಾಳಿ ಆಗು ಅಂದ್ರೆ ಚೆಂದಕ್ ಇರ್ತದ ನೀವೇ ಹೇಳಿ! ಇಂಥ ಹಬ್ಬದಲ್ಲಿ ಇನ್ನೊಬ್ಬರಿಗೆ ಅದ್ಹೆಂಗ ರೀ ದಿವಾಳಿ ಆಗು ಅಂತ ಹೇಳೋಕೆ ಮನಸು ಬರ್ತದೆ? ಅಯ್ಯೋ ಅದು ಹಿಂದಿ ಜನ ದೀಪಾವಳಿಗೆ ದಿವಾಳಿ ಅಂತ ಕರಿತಾರೆ ಅಂತ ನಮ್ಮ ಬೋರನ ಮಗ ನಿಂಗ ಹೇಳ್ತಾ ಇದ್ದ, ಆಗ್ಲೇ ಶ್ಯಾನೆ ವಿಶಯ(ವಿಷ) ಎಲ್ಲ ಗೊತ್ತಾಗಿದ್ದು. ಈ ಟಿ.ವಿ. ನಲ್ಲೂ ಅದೆಸ್ಟೋ ಸಾರಿ ಹ್ಯಾಪಿ ದಿವಾಳಿ ಅನ್ನೋದು ಕಂಡಿದ್ದೆ,ಸುಮ್ನೆ ಅರ್ಥ ಆಗದೆ ದಿವಾಳಿ ಆಗೋದೇ ಸರಿ ಅಂತ ಸುಮ್ಮನಿದ್ದೆ.ನೀವು ನೋಡು ದಿನ ನಿತ್ಯದ ಎಲ್ಲ ಕೊಕ್ ನಿಂದ ಹಿಡಿದು ಕಾರ್ ಮಾರೋ  ಎಲ್ಲ ಕಂಪನಿಗಳು ಕನ್ನಡ ಗ್ರಾಹಕರಿಗೆ ದಿವಾಳಿ ಆಗಿ ಅಂತ ಶುಭ ಹಾರೈಸ್ತ ಅವ್ರೆ.ಕೇರಳ,ಆಂಧ್ರ,ತಮಿಳ್ ನಾಡಿನ ಆಭರಣ ಅಂಗಡಿಗಳು ಗುಜರಾತ್,ಮಹಾರಾಷ್ಟ್ರದ ಸಿಹಿತಿಂಡಿ ಮಾರಾಟಗಾರರು,ಡೆಲ್ಲಿ-ಪಂಜಾಬ್-ಕಲ್ಕತ್ತಾ ಮೂಲದ ಬಟ್ಟೆ ವ್ಯಾಪಾರಿಗಳೆಲ್ಲ ನಮಗೆ ಟೋಪಿ ಹಾಕಿ ಹ್ಯಾಪಿ ದಿವಾಳಿ ಅಂದ್ರೆ ನಮ್ಮ ಜನಗಳು ದಿವಾಳಿ ಎದ್ದ್ರು ಟೋಪಿ ಹಾಕಿಸ್ಕೊಂಡು ಸಂತೋಷದಿಂದ ಇರೋದು ನೋಡಿದ್ರೆ, ಕನ್ನಡಿಗರ ಮುಗ್ಧತೇನೋ ಅಥವಾ ಮೂಢತೆನೋ ಅಂತ ಅರ್ಥ ಆಗ್ತಿಲ್ಲವೇ! ನೂರ  ಕ್ಕೆ ನೂರು ಇದು ಮೂಢತನನೆ.
ನಾವೆನಪ್ಪ ಮಾಡುದು ನಮ್ಮ ಕೈಲಿ ಏನಿದೆ ಅಂತೀರಾ?

ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವೂ ಮುಂದೆ..ಅಂತ ನಮ್ಮ ರಾಜಣ್ಣ ಹೇಳಿದ್ದು ಮರೆತು ಹೋದ್ರ? ನೀವು ಇವತ್ತು ಕೊಕ್ ಖರಿದೀಸಿ ಅಥವಾ ಕಾರು ಹ್ಯಾಪಿ ದಿವಾಳಿ ಅಂದ್ರೆ ಅವರಿಗೆ ನೀವು ತಿಳಿ ಹೇಳಿ.ವಿವಿಧ ಕಂಪನಿಗಳ ಇಮೇಲ್,ಮಿಂಚೆ ವಿಳಾಸ ತಗೊಂಡು ಮಿಂಚೆ ಬರೆಯಿರಿ.ಕರ್ನಾಟಕದಲ್ಲಿ ದಿವಾಳಿ ಅನ್ನೋದು ತಪ್ಪು ಕಣ್ರೋ, ದೀಪಾವಳಿ ಅಂತ ಒತ್ತಿ ಹೇಳಿ.ಇನ್ನು ಹಲವಾರು  ಬ್ಯಾಂಕಿನವರು ತಮ್ಮ  ಖಾತೆದಾರರಿಗೆ  ಧನ ತ್ರಯೋದಶಿ ಗೆ "ಧನ ತೇರಸ್ " ಅಂತ ಹಿಂದಿಗರ ಹಬ್ಬದ ಬಗ್ಗೆ ಹೇಳಿ ಬಂಗಾರ ಕೊಳ್ಳೋಕೆ ಉತ್ತಮ ದಿವಸ ಅಂತ ಹಿಂದಿ ಹೇರೋಕೆ ಬರ್ತಾವ್ರೆ.ಈ ಬ್ಯಾಂಕ್ ನಲ್ಲಿರೋ ಅಧಿಕಾರಿಗಳಿಗೂ ಪತ್ರ ಬರೀರಿ,ಇಮೇಲ್ ಮಾಡಿ.
ನಾನಂತೂ ಅಕ್ಷಿಸ್ ಬ್ಯಾಂಕಿನ ಅಧಿಕಾರಿಗಳಿಗೆ ಮಿಂಚೆ ಬರೆದು ನನಗೆನು ಬೇಕು ಅದನ್ನ ಹೇಳಿಯೇ ಬಿಟ್ಟೆ ( ನಾನು ಬರೆದ ಪತ್ರದ ಪ್ರತಿ ಪಕ್ಕಕ್ಕೆ ಒಂದು ಚಿತ್ರ ಹಾಕೀನಿ-ವಸಿ ಜೂಮ್ ಮಾಡ್ಕೊಂಡು ನೋಡ್ಕೊಳ್ಳಿ).ಹಿಂಗೆ ಬಿಟ್ಟರೆ ಲಾಲೂ ಬಂದು ನಮ್ಮ ನೈಋತ್ಯ ರೈಲ್ವೇಲಿ ಬಿಹಾರಿಗಳನ್ನ ತುಂಬಿದಂಗೆ ಎಲ್ಲ ಹಿಂದಿ ಜನಗಳು ಬಂದು ಕನ್ನಡ ಅಚ್ಚ ನಹಿ, ಹಿಂದಿ ರಾಷ್ಟ್ರ ಭಾಷಾ ಅಂತ ಮೂರು ನಾಮ ಹಾಕಿ ನಮ್ಮನ್ನ ನಮ್ಮೂರಲ್ಲೇ ಪರದೇಶಿ ಮಾಡೋದು ದೂರ ಇಲ್ಲ ಹುಷಾರ್!

ದೀಪಾವಳಿ ನಿಮ್ಮ ಬಾ
  ಅಂಧಕಾರ ದೂರ ಮಾಡಲಿ,ರಾಜ್ಯೋತ್ಸವದ ಶುಭ ಹಾರೈಕೆಗಳೊಂದಿಗೆ,
ಜಯತೀರ್ಥ.

Saturday, July 23, 2011

ಸಿಂಹ ಬೊಗಳತ್ತಂತೆ ನೋಡ್ರಪ?

ಎನ್ರಪ, ಎಲ್ಲಾರೂ ಹೆಂಗದಿರಿ?
 ಅದ್ಯಾವನೋ ರೋಹಿತ್ ಶೆಟ್ಟಿ ಅಂದ್ರೆ? ಹೆಸರು ನೋಡಿದ್ರೆ ಒಳ್ಳೆಯ ಕರಾವಳಿ ಕನ್ನಡಿಗ ಇದ್ದಂಗ ಅನಿಸತೈತಿ, ಮಾಡ್ತಾ ಇರೋ ಕೆಲಸ ನೋಡಿದ್ರೆ ಕನ್ನಡಿಗರೇ ಎಕ್ಕಡ ತಗೊಂಡು ಹೊಡ್ಯೋ ಹಂತ ಕೆಲಸ ಮಾಡ್ತಾನಲ್ರೋಪ. ಈ ತರಹ ಸುದ್ದಿ ಚರ್ಚೆ ನಿನ್ನೆ ನಮ್ಮ ಬಿಜಾಪುರ,ಬೀದರ,ಬೆಳಗಾವಿ, ಹುಬ್ಬಳ್ಳಿ ಎಲ್ಲ ಕಡೆ ಸಾಮಾನ್ಯ ವಾಗಿದ್ದು.
ಸುದ್ದಿ ಏನು ಅಂತ ಹೇಳೋದೇ ಮರೆತೇ ನೋಡಿ: 'ಸಿನ್ಘಂ'ಅಂತ ಒಂದು ಹಿಂದಿ ಚಿತ್ರ ಮೊನ್ನಿ ಶುಕ್ರವಾರ ಎಲ್ಲ ಕಡೆ ಬಿಡುಗಡೆ ಮಾಡ್ಯಾರ.ಅದರೋಳಾಗ ಮತ್ತೊಬ್ಬ ಕನ್ನಡಿಗ ಪ್ರಕಾಶ ರೈ ಮತ್ತು ಹೀರೋ ಅಜಯ ದೆವ್ಗುನ್ ನಡುವಿನ ಡೈಲಾಗ್ ದಾಗ ಕರ್ನಾಟಕದ ಸೀಮ್ಯಗಿಂದ ಜನ ಕರ್ಕೊಂಡು ಬಂದು ನಿಂಗ ಹೊಡ್ತಿನೋ ಮಗನೆ ಅಂತ ಪ್ರಕಾಶ್ ರೈ ಹೇಳಿದ್ರೆ,ಅಜಯ ನೀವು ಕನ್ನಡ ಮಂದಿ ನಾಯಿ ಇದ್ದಂಗ.ನಿಮ್ಮಂಥ ನಾಯಿಗೋಳಿಗೆ ನಾನೊಬ್ಬ ಸಾಕು ಅಂತ ಹೇಳ್ತಾನ.

ಉಂಡ ಮನಿಗೆ ದ್ರೋಹ ಬಗಿಯೋ ಗಂಡೆದೆ ಇಲ್ಲದ ಪುಂಡರನ್ನು ಜೀವ ಹಿಂಡೆನ್ದ ಪರಮಾತ್ಮ:

ಇಂಥ ಘಟನೆ ನಡೀಲಿ ಕತ್ತಿರೋದು ಇದೆ ಮೊದಲಲ್ಲರಿ. ನಮ್ಮ ಊರಾಗ ಬಂದು ನಮ್ಮ ಮನ್ಯಾಗ ತಿಂದು ನಮಗೆ ಬೈದು ಹೋಗು ನಾಯಿ ಜಾತಿ ಜನ ಬಹಳಷ್ಟು ಹುಟ್ಟಕೊಂಡಾರ್. ಅಲ್ಲಲ್ಲ ನಾಯಿ ಜಾತಿ ಅಲ್ಲ, ನಾಯಿನೂ ಇವರಿಗಿಂತ ನಿಯತ್ತಿಂದು ಪಾಪ ಅದರ ಕಿಮ್ಮತ್ತು ಕಮ್ಮಿ ಆದೀತು. ಇವರೆಲ್ಲ ನಾಯಿಗಿಂತ ಕಡೆ.ಈ ಮೊದಲು ಕೇಂದ್ರ ರೈಲ್ವೆ ಮಂತ್ರಿ ಇದ್ದನಲ ಅದೇ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಂತೆ ಇರುವ ಲಾಲೂ ಪ್ರಸಾದ ಯಾದವ್, ಈ ಮಗ ನಮಗೆ ಕಚಡಾಗಳು ಅಂತ ಕರ್ನಾಟಕಕ್ಕೆ ಬಂದಾಗ ಬೈದು ಹೋಗಿದ್ದ.ಬರಿ ತಮ್ಮ ಬಿಹಾರಿ ಬಾಬುಗಳನ್ನೇ ನಮ್ಮ ಹುಬ್ಬಳ್ಳಿ  ನೈಋತ್ಯ ರೈಲ್ವೆ ತುಂಬಾ ತುಂಬಿ, ತಮ್ಮ ತವರಿನಲ್ಲಿ ಕೆಲಸ ಇಲ್ಲದೆ ನಾವೇ ತಬ್ಬಲಿ ಆಗೋ ಹಂಗ ಮಾಡಿದ ಕೀರ್ತಿ ಈ ಮಹಾಶಯನಿಗೆ ಹೋಗ್ಬೇಕು.
ಇನ್ನ್ನೊಬ್ಬ ಇಲ್ಲೇ ಮಗ್ಗಲ ಮುಳ್ಳು , ಅದೇ ರೀ ರಜನಿಕಾಂತ!! ಈ ಸಾಹೇಬ್ರೆ ಕಾವೇರಿ ವಿವಾದ ಆದಾಗ ಕನ್ನಡಿಗರಿಗೆ ಒದ್ದರೆ ಚಲೋ ಇರ್ತದ ಅಂತ ಓದರಕೊಂಡು, ತನ್ನ ಚಿತ್ರ ಕನ್ನಡ ನಾಡಿನಾಗ ಬಿಡುಗಡೆ ಆಗುಮುಂದ ಬಾಲ ಸುಟ್ಟ ಬೆಕ್ಕಿನಂತೆ ಕ್ಷಮಾಪಣೆ ನಾಟಕ ಮಾಡಿದ್ರು. ಇವ್ರು ಏನು ಕಮ್ಮಿ ಇಲ್ಲ, ಬೆಂಗಳೂರಿನಾಗ ಹುಟ್ಟಿ ಬೆಳೆದು ಕಾವೇರಿ ನೀರು ಕುಡಿದು, ತಮಿಳನ್ಯಾಗ ಕೀರ್ತಿ ಗಳಿಸಿ,ಸಾಕಿದ ತಾಯಿಗೆ ಒದ್ದು ಓಡಿ ಹೋಗು ಚಿಲ್ಲರ ಬುದ್ದಿ ಇದ್ದವರು.

ಬಿಗ್ ಸಮೂಹ ಬಗ್ಗೋದು ಹೆಂಗ:
  • ಕೃಷ್ ಅನ್ನೋ ಹಿಂದಿ ಸಿನಿಮಾ ನ ನಿಯಮ ಬಾಹಿರವಾಗಿ ಹೆಚ್ಚಿನ ಪ್ರಿಂಟ್ ಕರ್ನಾಟಕದಾಗ ರಿಲೀಸ್ ಮಾಡಿದ್ದವರು 
  • ಬಿಗ್ ಎಫ್.ಎಂ ದಾಗ ಕನ್ನಡ ಚಿತ್ರರಂಗಕ್ಕೆ ಅವಹೇಳನಕಾರಿ ಮಾತಾಡಿದ್ದು.
ಇದೆ ಪುಂಡರೆ ಈ ಸಿನ್ಘಂ ಅನ್ನೋ ಚಿತ್ರದ ಮುಖ್ಯ ನಿರ್ಮಾಪಕರು.ರಿಲಾಯನ್ಸ್ ಸಂಸ್ಥೆ ಅಡಿಯಲ್ಲಿ ಬರೊ ಈ ಬಿಗ್ ಸಮೂಹ ಕಂಪನಿಗಳು ಮ್ಯಾಲೆ ಮ್ಯಾಲೆ ನಮ್ಮ ತಂಟೆಗೆ ಬರಾಕತ್ತಾರ. ಅಷ್ಟ ಅಲ್ಲರಿ ಈ ಬಿಗ್.ಎಫ್.ಎಂ ಕನ್ನಡ ಹಾಡು ಪ್ರಸಾರ ಮಾಡಿ ಬೆಂಗಳೂರುನ್ಯಾಗ ನಂಬರ ವನ ಸ್ಥಾನ ಪಡಕೊಂಡು, ಈಗ ನದಿ ದಾಟಿದ ಮೇಲೆ ಅಮ್ಬಿಗ್ಯಾಂದು ಏನು ಕೆಲಸ ಅಂತ ಕನ್ನಡ ಸಂಗೀತ ಬಿಟ್ಟು ಹಿಂದಿ ಹಿಂದಿ ಅಂತ ಹೊಡ್ಕೋತ ಇದ್ದಾರೆ.ಅದಕ್ಕೆ ಈ ಎಫ್.ಎಂ ಚಾನೆಲ್ ನನ್ನ ಮೊಬೈಲ್ ದಿಂದ ಡಿಲೀಟ್ ಮಾಡಿನಿ.ನನ್ನ ಗೆಳೆಯರು ಅದೇ ಮಾಡಕತ್ತರ ನೋಡ್ರಿ. ನೀವು ಇವರಿಗೆ ಹಿಂಗೆ ಬಗ್ಗಿಸಿದ್ರೆ ಬಗ್ಗೋದು ಇಲ್ಲಾಂದ್ರೆ ನಮಗೆ ನಾಯಿ ಪಾಡೇ ಮಾಡುದಂತು ೧೦೦% ಖರೆ.

ಒಂದೇ ಒಂದು ಪ್ರಶ್ನೆ:

ನಿವೆಲ್ಲಾರಿಗೂ ನನ್ನ ಕಡೆಯಿಂದ ಒಂದೇ ಒಂದು ಪ್ರಶ್ನೆ,ಏನ ಅಂದ್ರೆ: ಕರ್ನಾಟಕ ಮತ್ತು ಕನ್ನಡಿಗರು ಅಂದ್ರೆ ಏನು ತಿಳ ಕೊಂಡಾರ ಈ ಜನ? ಬೇಕಾದವ ಬಂದು, ಬಾಯಿ ಬಂದಹಂಗ ಬೈಸಿ ಕೊಳ್ಳಕ ನಾವೇನು ಬಿಟ್ಟಿ ಬಿದ್ದಿವ? ಅಲ್ಲರಿ ಪದೇ ಪದೇ ನಮ್ಮ ಸ್ವಾಭಿಮಾನಕ್ಕೆ ಈ ರೀತಿ ಪ್ರಶ್ನೆ ಹಾಕ್ತ ಇರೋ ಈ ಜನಕ್ಕೆ ನಾವೇ ಯಾಕೆ ಉತ್ತರ ಕೊಡದೆ ಹಂಗೆ ಕೈ ಕಟ್ಟಿ ಕುತಿವಿ?
ಸುಮ್ಮನೆ ಇದ್ರೆ ಹಿಂಗ ಊರು ಕೊಳ್ಳೆ ಹೊಡೆದು ಹೋದಮ್ಯಾಲೆ ಕ್ವಾಟಿ ಬಾಗಿಲ ಮುಚ್ಚದ್ರಂತ ಅಂತ ಪರಿಸ್ತಿತಿ ಬರುದು ದೂರ ಇಲ್ಲ.ಅದಕ್ಕೆ ಮೊದಲೇ ನಾವು ಜಾಗೃತರಾಗಿ ಎದ್ದೆಳುದು ಮುಖ್ಯ ಅದ.
ಒಂದೇ ಮಾತನಾಗ ಹೇಳಬೇಕು ಅಂದ್ರೆ ಈ ಎಲ್ಲ ಜನಕ್ಕೆ ನಮ್ಮ ಕನ್ನಡದ ಮಾರುಕಟ್ಟೆ ಮ್ಯಾಲೆ ಕಣ್ಣ ಐತಿ,ನಮ್ಮ ಮೂರ್ಖತನದ ಲಾಭ ಇವರಿಗೆ ಸಿಗ್ತಾ ಇದೆ ಅಂದ್ರೆ ತಪ್ಪಲ್ಲ. ನಾವು ಮೊದಲು ಇಂಥವರಿಗೆ ನಮ್ಮ ಮಾರುಕಟ್ಟೆ ಬಿಟ್ಟು ಕೊಡಬಾರದು. ಇರಲಿಕ್ಕೆ ನಿಮ್ಮ ಮನಿ ಬೇಕು ಆದರ ನಿಮ್ಮ ಮಾತು ಬಾಶೆ ಬೇಡ ಅಂದ್ರೆ ಯಾವ ಲೆಕ್ಕರೀ ಇದು? ಹಿಂದಿ ಫಿಲಂಸ್ ಭಾರಿ,ಬಾಲಿವುಡ್ ಮಸ್ತದ ಅಂತ ತಲೆ ಮೇಲೆ ಹೊತ್ತು ಮೆರೆಸುದು ಬಿಟ್ಟು, ನಮ್ಮ ಜನ,ನಮ್ಮ ಬಾಶೆ ಕಡೆ ಸ್ವಲ್ಪ ಕೆಲಸ ಮಾಡ್ಬೇಕು.ಇದರಾಗ ಈ ನಮ್ಮ ಕನ್ನಡ ಸುದ್ದಿ ವಾಹಿನಿಗಳು,ನೆರೆ ಬಾಶೆ ಚಿತ್ರಕ್ಕೆ ಬೇಕಾ ಬಿಟ್ಟಿ ಪ್ರಚಾರ ಕೊಟ್ಟು ಮೆರೆಸ ಕತ್ತಾರ.ಈ ಮಂದಿಗೆ  ನಾವೇ ಮುಂದ ನಿಂತು ತಿಳುವಳಿಕೆ ಹೇಳಬೇಕು. ಇವತ್ತಿಂದು ಐ.ಟಿ.ಯುಗ, ಫೇಸ್ ಬುಕ್,ಟ್ವಿಟ್ಟರ್ ಅಂತ ಸಾಮಾಜಿಕ ತಾಣದಾಗ ಎಲ್ಲರೊಂದಿಗೆ ಸಂಪರ್ಕಿಸ ಬಹುದು.ಇಲ್ಲಿ ನಿಮ್ಮ ವಿಚಾರವನ್ನು ನೇರವಾಗಿ ಸುದ್ದಿ ವಾಹಿನಿಗೆ ಆಗಲಿ,ಜನರಿಗೆ ಆಗಲಿ ನೇರವಾಗಿ ಹೇಳಿ ಜನರಿಗೆ ಬಡಿದೆಬ್ಬಿಸಬಹುದು.
ಸ್ವಾಭಿಮಾನ ಸಾಯಕ ಬಿಟ್ಟು ಸುಮ್ಮನೆ ಕೈಕಟ್ಟಿ ಕೂಡ ಬ್ಯಾಡ್ರಿ.ಬಂಗಾರದ ಮನುಷ್ಯ ಸಿನೆಮಾದಾಗ ನಮ್ಮ ಅಣ್ಣಾವ್ರು ಹಾಡು ನೆನಪು ಮಾಡ್ಕೊಂಡು ಮುಂದ ನಡೀರಿ.

Wednesday, April 20, 2011

ಇದು ಪಕ್ಕ ಕಪ್ಪಿ ತೂಕ ನೋಡ್ರಿ ಸರ್::: ಕಾಪಿ ಚಿಟಿ ನೋಡಿ ಬರಿಬ್ಯಾಡ್ರಿ, ಅದೇ ಕಾಪಿ ಚೀಟಿನ ಪರೀಕ್ಷ ಕೋಣೆಲಿ ಬಾಯಪಾಠ ಮಾಡಿ ಬರೀರಿ ಅಂದಂಗೆ ಆಯಿತು!!!

ನಮಸ್ಕಾರ್ರಿ ; ನಾನ ಜಯತೀರ್ಥ ರೀ  ಅಂತ ಮೊನ್ನೆ ನಮ್ಮ ದೊಸ್ತಗ ಕೈ ಮಾಡಿದ್ರೆ , ಏಮಿ ನಮಸ್ಕಾರ ಮಂಡಿ, ಎಲ್ಲ ಸೌಖ್ಯಮ?ಏಳವುನ್ನರು ಮೀರು ಅಂದ! ಮೊದ್ಲೇ ಉರಿ ಉರಿ ಬಿಸಿಲ ದಿನದಾಗ ಒಮ್ಮೆ ಶಾಕ್ ಹೊಡದಂಗಾತು. ಹೌದ್ರಿ ಮಹಾರಯ್ರೆ. ಏನ್ರೋ  ಏನಿದು ಅಂತ ಕೇಳಿದ್ರೆ ಬ್ಲಾಕ್ ಟಿಕೆಟ್ ತಗೊಂಡು ರಜನಿಕಾಂತ್ ತೆಲುಗು ಪಿಕ್ಚರ್ ನೋಡಿಬಂದಿವಿ,ಆ ಭಾಷೆನು ಅರ್ಥ ಅಗ್ಲಾಕತ್ತೈತಿ ಅಂತ ಖುಷಿಯಿಂದ ಹೇಳಿದ್ದು ನೋಡಿ ಇವರಿಗೆ ಕಾಲಾಗಿನ ಕೆರ  ತಗೊಂಡು ಹೊಡಿಬೇಕು ಅಂತ ಅನಿಸದೆ ಇರ್ಲಿಲ್ಲ . ಅದ್ಯಾಕ್ರೋ ಕನ್ನಡ ಬಿಟ್ಟು ಪರಭಾಷಾ ಪಿಕ್ಚರ್ ನೋಡೋ ರೋಗ ಅಂದ್ರೆ ,ಇವರ ಭಾಷಣ ಕೇಳಿ ಹೆಂಗಿತ್ತು:ನಮ್ಮ ಕನ್ನಡದ ಮಂದಿ ರಜನೀಕಾಂತ್,ಟಾಮ್ ಕ್ರೂಇಸ್ ,ಚೀರನ್ಜೀವಿ , ಇವರನ್ನೆಲ್ಲ ನೋಡ್ಬೇಕು ಅಂದ್ರೆ ತೆಲುಗು,ತಮಿಳ್ ,ಇಂಗ್ಲಿಷ್ ದಾಗ ನೋಡ್ಬೇಕು. ನೋಡಿ ನೋಡಿ  ನಮ್ಮ ಜನ ಆಯಾ ಭಾಷೆ ಕಲಿಲಾಕತ್ತ್ಯಾರು ನೋಡ್ರಿ.ಬಹಳ ಮಂದಿ ನನ್ನ ಗೆಳ್ಯಾರ ರೆಸುಮೆ ನೋಡಿದ್ರೆ ಭಾಷೆಗಳಲ್ಲಿ ತೆಲುಗು,ತಮಿಳ್ ಎಲ್ಲಾನು ಸೇರಿಸಿರ್ತಾರೆ.ಅದ್ಹೆಂಗ ಗೊತ್ತು ನಿಂಗ ಮಗನ ಅಂತ ಕೇಳಿದ್ರೆ:"ಇಲ್ಲೋಲೆ ಮಗನ ಮೊನ್ನೆ ಒಂದೆರಡು ತೆಲುಗು,ತಮಿಳ್ ಪಿಕ್ಚರ್ ನೋಡಿ ಬಂದಿವು, ಸಣ್ಣಗೆ ಅವು ಅರ್ಥ ಆಗ್ತಾ ಇದಾವು ಅಂತ ನಂಗೆ ಮಖಕ್ಕೆ ಹೊಡಿದಂಗೆ ಹೇಳಿದ್ರು ನೋಡ್ರಿ." ಒಂದು ಕ್ಷಣ ನಂಗೆ ಅನಿಸ್ಲಾಕತ್ತಿತ್ತು , ಏನು ಮಾಡುದರಿ ನಾವಂತೂ ಏನೂ ಮಾಡಕ್ಕಾಗಲ್ಲ ನಮ್ಮ ಉದ್ಯಮ ಡಬ್ಬಿಂಗ ವಿರೋಧಿ ಇದೆ, ಅದಕ್ಕೆ ಮುಚ್ಕೊಂಡು ಅರ್ಥ ಆಗದೆ ಇದ್ರೂ ತಮಿಳ್,ತೆಲುಗು,ಮಲಯಾಳಂ ನಲ್ಲೆ ಆಯ ಚಿತ್ರನೋಡಿ ಖುಷಿಪಡಬೇಕು ಅನ್ನೋ ಪರಿಸ್ಥಿತಿ ಹುಟ್ಟಿ ಹಾಕ್ಯಾರ. ಅಲ್ಲರಿ ಗ್ರಾಹಕರಾಗಿ ನಮಗೆ ಬೇಕಾಗೋ ಸೇವೆಗಳಲ್ಲಿ ಆಯ್ಕೆ ನಮಗ ಇರಬೇಕೋ ಅಥವಾ ಸೇವೆ ನೀಡೊನಿಗೆ ಇರ್ಬೇಕು.ಒಂದೇ ಸಲ ವಿಚಾರ ಮಾದ್ರಿ, ನೀವು ನಿಮ್ಮ ಊರಾಗ ಹೋಟೆಲಕ ಹೋದ್ರಿ ಅಲ್ಲಿ ನಿಮ್ಮ ಮುಂದೆ ಸೆರ್ವೆರ್ ಬಂದು ಉಪ್ಪಿಟ್ಟು,ಇಡ್ಲಿ,ದೋಸೆ,ಉತ್ತಪ್ಪ,ವಡೆ, ಅಂತ ಒಂದು ದೊಡ್ಡ ಲಿಸ್ಟೇ ವದರ್ತಾನೆ ಆವಾಗ ನಿಮಗೇನು ಬೇಕೋ ನೀವು ತಗೊತಿರಿ ಹೌದಲ್ಲರಿ? ಹಿಂಗ ಇರ್ಬೇಕಾದ್ರ ಇನ್ನ ನಮ್ಮ ಮನರಂಜನೆಗೆ ಅಂತ ಇರೋ ಸಿನಿಮಾದಾಗೂ ನಾವು ಅದನ್ನ ಕಾಣಬೇಕಲ್ಲ?

ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿ ನಮ್ಮ ಕಣ್ಣಿಗೆ ಸುಣ್ಣ ಹಾಕಲಾ ಕತ್ತಾರ :
ನಮ್ಮ ಕೆ.ಎಫ್.ಆಯ ನೋಡ್ರಿ ಹಿಂದೆ ಮುಂದೆ ನೋಡದೆ ಡಬ್ಬಿಂಗ್ ಬ್ಯಾಡ್ರೋ ಬ್ಯಾಡ್ರೋ ಅಂತ ಹೊಯ್ಕೋಳ ಕತ್ತ್ಯಾರು,ಸಾಮಾನ್ಯ ಮಂದಿ ನಾವು ಮಾಡುವಸ್ಟು ವಿಚಾರರೆ ಇವರ ಮಾಡ್ತಾರ,ಅದೇನೋ ಅಪ್ಪ ಹಾಕಿದ ಆಲದ ಮರ ಅಂತ ಹೇಳಿ ಅದನ್ನ ಕಂಟಿನ್ಯೂ ಮಾಡಿದ್ರೆ ಹೆಂಗ್ ನಡಿಬೇಕ್ರಿ ಬಾಳೇ? ಈಗ ಜಗತ್ತು ಭಾಳ ಮುಂದು ಹೊಗೈತಿರಿ..ನಾವು ಬೇರೆ ಭಾಷೆ ಸಿನೆಮಾನ ಕನ್ನಡದಾಗ ಡಬ್ಬ ಮಾಡಿದ್ರೆ ನಮ್ಮ ಮಂದಿಗೆ ಕೆಲಸ ಸಿಗತಾವು, ಸಿನೆಮಾ ನಂಬಿ ಬದ್ಕೋ ಎಷ್ಟು ಕುಟುಂಬಗಳು ೨ ಹೊತ್ತು ಚಂದಂಗ ಊಟ ಮಾಡ್ತಾರೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಕನ್ನಡದಾಗೆ ಕಾರ್ಟೂನ್,ಡಿಸ್ಕಾವೆರಿ,ಅನಿಮಲ್ ಪ್ಲಾನೆಟ್,ಪೋಗೋ ಎಲ್ಲ ನೋಡ್ತಾರೆ. ದೂರದ ಬೆಟ್ಟ ಕಣ್ಣಿಗೆ ಸಣ್ಣಗೆ ಚಂದಂಗೆ ಕಾಣತೈತಿ ಅಂತ ಅದನ್ನ ದೂರಿಂದ ನೋಡಿದ್ರೆ ಏನು ಲಾಭ ಇಲ್ಲ್ರಿ,ಬೆಟ್ಟ ಹತ್ತಿ ಅದರ ಮಜಾ ತಗೋಬೇಕು ಅಂದ್ರೆ ನಾವು ಬೆಟ್ಟ ಹತ್ತಾಕ ಬೇಕು! ಇದೆ ರೀತಿ ನಮ್ಮ ಕನ್ನಡ ಸಿನಿಮಾ ಮಂದಿ ದೂರ ದಿಂದ ನೋಡಿ ಡಬ್ಬಿಂಗ್ ಬ್ಯಾಡ, ಅದರಿಂದ ನಮ್ಮ ಜನಕ್ಕೆ ಹಾಳು ಅಂತ ಸುಳ್ಳು ವಾದಿಸಾಕತ್ತ್ಯಾರು! ಇಂಥ ಮೂರ್ಖರಿಗೆ ನಮಂಥ ಕಲಿತ ಮಂದಿ ಬುದ್ಧಿ ಹೇಳಿ ನಮಗೆ ಏನೋ ಬೇಕಾದ್ದು ನಾವು ಆರಿಸ್ಕೊತಿವಿ, ನಿಮ್ಮ ಬದಕು ಹಸನ ಮಾಡ್ತಿವಿ ಅಂದ್ರೆ, ಇವರು ಒಪ್ಪಬೇಕ್ರಿ ಸರ್.ನನಗು ಮಿಶನ್ ಇಮ್ಪೋಸಿಬಲ್ ಅನ್ನೋ ಫಿಲ್ಮದಾಗ ಅದನ ನೋಡ್ರಿ ಟಾಮ್ ಕ್ರೂಇಸ್ ಅವನ್ನ ಸಿನಿಮಾ ಕನ್ನಡದಾಗ ನೋಡ್ಬೇಕು ಭಾಳ ಆಶಾ ಐತಿ, ಆದರ ನೋಡ್ರಿ ಎಂಥ ಜನ ನಮಗೆ ಏನು ಬೇಕೋ ಅದನ್ನ ನೋಡಾಕ ಬಿಡವಲ್ಲರು. ಸಣ್ಣವರು ಇದ್ದಗಿಂದ ನಮ್ಮ ಕನ್ನಡ ಸಾಲಿ ಮಾಸ್ತರು ಹೇಳ್ತಿದ್ರು " ಗ್ರಾಹಕನೇ ರಾಜ, ಗ್ರಾಹಕ ಹೇಳಿದಂಗೆ ವ್ಯಾಪಾರಿ ಕೇಳಬೇಕು, ಅವನಿಗೆ ಏನು ಬೇಕೋ ಅದನ್ನ ನಾವು ಕೊಡಬೇಕಂತ" , ಆದ್ರ ನಮ್ಮ ಕೆ,ಎಫ್.ಆಯ ನೀತಿ ನೋಡಿದ್ರೆ ಇದಕ್ಕ ತದ್ವಿರುದ್ಧ ನಡೆದುಕೊಂಡು ನಮಗೆ ದ್ರೋಹ ಬಗ್ಯಾಕತ್ತದ. ಇದನ್ನ ಮುಂದವರೆಸಿದ್ರ ನಮ್ಮ ಜನಕ್ಕೆ ಇವ್ರು ಹಳ್ಳಾ ಹಿಡಿಸುದು ಗ್ಯಾರಂಟಿರಪ್ಪೋ!!!!!!!!

ನಮ್ಮ ಮಂದಿಯಿಂದ ನಮಗೆ ದ್ರೋಹ: ತಿಂದ ಮನಿಗೆ ಕಣ್ಣು ಹಾಕೋ ಜನ
ಈಗ ನೋಡ್ರಿ, ನಮ್ಮ ನಟ ಅಶೋಕ್ ನಾಯಕ್ತ್ವದಾಗ ಇವರೆಲ್ಲ ಸೇರಿ ಡಬ್ಬಿಂಗ್ ಬ್ಯಾಡ ಅಂತ ಮತ್ತ ತಮ್ಮ ಹಳೆ ಜಿದ್ದ  ಶುರು ಮಾಡ್ಯಾರ.ನಾನಂತೂ ಇವರ ವಿರುದ್ಧ ನನ್ನ ಹಕ್ಕಿನ ಪರವಾಗಿ ನಿಲ್ಲತಿನಿ.ಭಾಳ ವಿಚಾರ ಮಾಡಬ್ಯಾಡ್ರಿ , ಕನ್ನಡಕ್ಕೆ ದ್ರೋಹ ಬಗ್ಯಾರ ಜೊತೆ ಸೇರಿ ನಾಲ್ಕು ಮನೆ ಹಾಳು  ಮಾಡಿದ್ರೆ ಕೂಡಲ ಸಂಗಮ ದೇವ  ನಿಮ್ಮನ್ನ ಮೆಚ್ಚನ್ಗಿಲ್ಲ..ಹಂಗಾದ್ರೆ ಇದನ್ನ ಉಳಿಸಾಕ ನೀವು ನನ್ನ ಜೊತೆ ಹೆಜ್ಜೆ ಹಾಕ್ತಿರಿಲ್ಲ ಮತ್ತ?
ಎಲ್ಲರಿಗೂ ಅಡ್ಡ ಬಿದ್ದೆ.....
ನಿಮ್ಮ ದೋಸ್ತ
ಜಯತೀರ್ಥ